ನಮ್ಮೂರ ಕೇರಿ

ನಮ್ಮೂರ ಕೇರಿಯಲಿ ಯಾರೂ
ಹಸನಾದ ಬದುಕು ಕಂಡವರಿಲ್ಲ
ಮನುಷ್ಯರ ತರ ಬದುಕಿದವರಿಲ್ಲ

ಇಲ್ಲಿ ಹುಟ್ಟಿದವರು…
ಒಂದು ಹಿಡಿ ಅನ್ನಕ್ಕಾಗಿ
ಬೊಗಸೆ ನೀರಿಗಾಗಿ
ಬಾಯಿತೆರೆದು ಕೈಮಾಡಿ
ಕಾಯುತ್ತಾ ನಿಲ್ಲುವರು.

ಬೈಗುಳಗಳೊಂದಿಗೆ….
ಮುಂಜಾನೆ ಮನೆಗೂಡಿಸಿ
ಅವರ ಮನೆಯಂಗಳ ಹಸನಗೊಳಿಸುತ
ಹೊಲಸಲಿ ಹರಕಲುಗಳಾಗಿಹರು

ಎತ್ತಿಕೊಟ್ಟ, ಅನ್ನ, ನೀರು…
ಹೊಟ್ಟೆ ಹಸಿವು ತುಂಬಿದ
ತೃಪ್ತಿಯಲಿ, ಅತೃಪ್ತ ಬದುಕಲಿವರು
ಒಡೆದ ಕನಸು ಮನಸಲಿ ಬಾಳುತಿಹರು

ತಮ್ಮನ್ನು ಹಡೆದ
ಅಪ್ಪ ಅವ್ವಂದಿರನ್ನೆ
ಅಸ್ಪೃಶ್ಯತೆಯಲಿ ಕಾಣುತಲಿವರು
ತಾವೇ ಅಸ್ಪೃಶ್ಯರಾಗಿಹರು

ಈ ಕೇರಿಯಲಿ ಬದುಕುವ
ಆಶೆ ಯಾರಿಗೂ ಇಲ್ಲ…
ಬದುಕುತ್ತಿದ್ದಾರೆ ಇದ್ದು…
ಸತ್ತಹಾಗೆ ಯಾರ ತಪ್ಪಿಗಾಗಿ?
ಪ್ರಶ್ನೆ ಪ್ರಶ್ನೆಯಾಗಿಯೇ ಇದೆ….

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರೋ ಸಾರೋ ಸಾರೋ ಸುಮ್ಮನೆ
Next post ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys